Advertisements
ಮೂಡುಬಿದಿರೆಯ ಕಡಲಕೆರೆಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಬಿದಿರು ವನವನ್ನು ನಿರ್ಮಾಣ ಮಾಡಿದ್ದು ಆ ವನದಲ್ಲಿ ವಿವಿಧ ಜಾತಿಯ ಅತ್ಯಪರೂಪದ 54 ಜಾತಿಯ ಬಿದಿರು ತಳಿಗಳನ್ನು ಬೆಳೆಸಲಾಗಿದೆ. ಇಂದು ಸದ್ರಿ ಬಿದಿರು ವನದ ಉದ್ಘಾಟನೆಯನ್ನು ಸನ್ಮಾನ್ಯ ಅರಣ್ಯ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಅರವಿಂದ ಲಿಂಬಾವಳಿಯವರು ಹಾಗೂ ಮಾನ್ಯ ಶಾಸಕರಾದ ಶ್ರೀ ಉಮಾನಾಥ್ ಕೋಟ್ಯಾನ್ ರವರು ನೆರವೇರಿಸಿದರು ಮತ್ತು ಕಡಲಕೆರೆಗೆ ಮೀನು ಮರಿಗಳನ್ನು ಬಿಡುವ ಕಾರ್ಯಕ್ರಮಕ್ಕೆ ಹಾಗೂ ಕಡಲಕೆರೆ ದೋಣಿ ವಿಹಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
